Hi,
ಒಂದು ದಿನ ನಾನು ಬೆ೦ಗಳುರಿನಲ್ಲಿ ಬಸ್ ಪ್ರಯಾಣ ಮಾಡೋವಾಗ ನೋಡಿದ ಘಟನೆ:
ಇದು ಬೆ೦ಗಳುರಿಗರಿಗೆ ಸಾಮಾನ್ಯ. ೨ ಹೆ೦ಗಸರು ಜಗಳ ಮಾಡೋ ದೃಶ್ಯ ನಾನು ಬಸ್ ಹತ್ತಿದಾಗ.
ಹೆ೦ಗ್ಸು ೧: ಏನೆ ಹಾಗೆ ದೂಡ್ಕೊಂಡು ಹೋಗ್ತಾ ಇದೀಯಾ!
ಹೆ೦ಗ್ಸು ೨: ನಾನೇನ್ ಮಾಡ್ದೆ, ನೀನೇನ್ ಭಾರೀ ರಾಣಿ!
ಹೆ೦ಗ್ಸು೧: ಆಹಾಹಾ.. ಏನೆ #$%##$% (ಭೀಕರ ಇತ್ತು ನಾ ಹೇಳೋಲ್ಲಪ್ಪಾ!)
ಅಷ್ಟರಲ್ಲಿ ಹೆ೦ಗ್ಸು ೩ ಎ೦ಟರ್.
ಹೆ೦ಗ್ಸು೩: ಎ ಸುಮ್ನೆ ಜಗಳ ಆದ್ಬೇಡಿ ಸ್ವಲ್ಪ್ ಸುಮ್ನಿರಿ.
ಹೆ೦ಗ್ಸು೨: ಏನೇ ನಿ೦ದೇನು ಭಾರೀ? ನ೦ಗೇ ಬುದ್ದಿ ಹೇಳ್ತೀಯಾ?
ಹೆ೦ಗ್ಸು೩ ಹಯ್ಯೋ ಅ೦ತಾ ಕಿವಿನ ಬೆರಳಲ್ಲಿ ಮುಚ್ಕ೦ಡಳು!
ಹೆ೦ಗ್ಸು೨: ಹೂ ಬೆರಳು ಏನ್ ಹಾಕ್ತೀಯಾ ಹತ್ತಿ ಇಟ್ಕೋ...
ಥತ್ ಇದೇನ್ ರಾಮಾಯಣಾ! ರಾಮ ರಾಮ ಅ೦ತ ನಗೊದೋ ಆಳುವುದೋ ತಿಳಿಲಿಲ್ಲ!
ಈ ಬೆ೦ಗ್ಳೋರ್ ಜನ ಅಷ್ಟ್ ಶಕ್ತಿ ಬೊಬ್ಬೆ ಹೊಡಿಯುದ್ರಲ್ಲಿ ಹಾಳ್ ಮಾಡ್ತಾರಲ್ಲ,
ಯಾಕೆ?
ಇಷ್ಟ ಸಮಯದಲ್ಲಿ ತಿಳೀಲಿಲ್ಲ. ಅದೇನ್ ಸಿಗೊತೋ ಬೊಬ್ಬೆ ಹಾಕೀ ಅ ಶಿವನೆ ಬಲ್ಲ!
ಇಲ್ಲಿ ಎಲ್ರೂ ರಾಜಕಾರಣಿ ಆಗೋ ಪವರ್ ಇರೋರು ನನ್ನ ಬಿಟ್ಟು!
ಏನು ಹಾಗೆ ಓದ್ತಾ ಇದೀಯಾ ಹಾಕು ಕಮ್ಮೆ೦ಟು! :)
2 comments:
aregentu maani nInu hELiddu satya. enagu inta anubhava aayidu..
Exactly Genta. Bengalooru tumbaa kettu hOydu. Namma ooru yeshTo better. But fate! or Wat? :)
Post a Comment